Monday, June 7, 2010

Literature and Social Health - Memorial Lecture in PowerPoint Presentation


ಸಾಹಿತ್ಯ ಮತ್ತು ಸಾಮಾಜಿಕ  ಸ್ವಾಸ್ಥ್ಯ 
ಎಂ. ಎಸ್. ತಿಮ್ಮಪ್ಪ

೧೧  ನೇ ಮಾಸ್ತಿ ಸ್ಮಾರಕ ವಿಶೇಷ ವಾರ್ಷಿಕ ಉಪನ್ಯಾಸ ೨೦೧೦ 
ಸಾಹಿತ್ಯ ಮತ್ತು ಸಾಮಾಜಿಕ ಸ್ವಾಸ್ಥ್ಯ
            ಮಾಸ್ತಿಗೆ ನುಡಿ ನಮನ     

    “ದೊಡ್ಡವರ ಸಂಖ್ಯೆ ಕಡಮೆ. ಅವರ ಕಷ್ಟಸುಖವನ್ನು ಅವರು ನೋಡಿಕೊಳ್ಳಬಲ್ಲರು; ತಿಳಿದುಕೊಳ್ಳಬಲ್ಲರು. ಸಾಮಾನ್ಯರ ಸಂಖ್ಯೆ ಬಹು ದೊಡ್ಡದು. ಅವರ ಕಷ್ಟ ಸುಖವನ್ನು ಪ್ರಪಂಚ ನೋಡಿಕೊಳ್ಳಬೇಕಾಗುತ್ತದೆ. ಈ ಸಾಮಾನ್ಯ ವ್ಯಕ್ತಿತ್ವದ ಸಾಮಾನ್ಯ ಅನುಭವವೇನು ಎನ್ನುವುದನ್ನು ತಿಳಿದೇ ಸಮಾಜ ಬಹು ಜನಕ್ಕೆ ಯಾವುದು ಒಳ್ಳೆಯದೆಂಬುದನ್ನು ಗ್ರಹಿಸಬಹುದು, ಪ್ರಯೋಗಿಸಬಹುದು, ನಡೆಸಬಹುದು. ಈ ಕಾರಣದಿಂದ ಮಹನೀಯವಲ್ಲದಿದ್ದರೂ, ಇಂಥ ಒಂದುಬಾಳುವೆಯ ಅನುಭವವನ್ನು ಲೋಕ ಅರಿಯುವುದು ಅವಶ್ಯಕ.”
                                                                       …………                   
               ನುಡಿ ನಮನ

    “ಎಷ್ಟು ಸಣ್ಣದಾದರೂ ಈ ಬದುಕು ಲೋಕದ  ಬದುಕಿನಲ್ಲಿ  ಒಂದು ಅಂಗ. ವಿಶ್ವದ ಜೀವನ ತನ್ನನ್ನು ತಾನು ನೋಡಿಕೊಳ್ಳುವುದಕ್ಕೆ ಈ ಕೋಟ್ಯಂತರ ಜೀವನದಲ್ಲಿ ಆಕಾರಗೊಂಡಿದೆ. ಅದರಲ್ಲಿ ಈ ಒಂದೊಂದು ಕಣವೂ ಒಂದು ಕೇಂದ್ರ. ಸೃಷ್ಟಿಯೆಲ್ಲಾ ಒಂದು. ಈ ಒಂದು ಬದುಕೇ ಒಂದು.” 
    “ಜೀವನ ಎಷ್ಟುಮಟ್ಟಿಗೆ ಸಾಮನ್ಯ ರೀತಿಯಾದಾದರೆ ಅಷ್ಟುಮಟ್ಟಿಗೆ ಅದು ಈ ರೀತಿಯ ಪ್ರಾತಿನಿಧ್ಯವನ್ನು ಸಾಧಿಸುತ್ತದೆ. ನಾನು ಪರಿಶೀಲಿಸುವ ಜೀವನ ಈ ರೀತಿಯಾಗಿ ಬಹುಜನದ  ಜೀವನದ ಪ್ರತಿನಿಧಿ ಎಂದು ನನ್ನ ನಂಬಿಕೆ.”  
    ಮಾಸ್ತಿ ವೆಂಕಟೇಶ ಅಯ್ಯಂಗಾರ್(೨೦೦೮) ಭಾವ-ಭಾಗ೧, ಪುಟ೧-೨
ಸಾಹಿತ್ಯ

    ಸೃಜನಶೀಲ ಸಾಹಿತ್ಯ 
    • ಕಾವ್ಯ, ಕತೆ, ಕಾದಂಬರಿ, ನಾಟಕ, ಹಾಸ್ಯ ಬರಹಗಳು

    ವಿಜ್ಞಾನ ಸಾಹಿತ್ಯಃ 
    • ಮನೋವಿಜ್ಞಾನ, ಸಮಾಜವಿಜ್ಞಾನ, ತತ್ವಶಾಸ್ತ್ರ ಇತ್ಯಾದಿ
ಸಾಮಾಜಿಕ  ಸ್ವಾಸ್ಥ್ಯ

    • ಸಂಬಂಧಗಳು, ಕುಟುಂಬ, ಸಂಸ್ಥೆ, ರಾಜ್ಯ, ರಾಷ್ಟ್ರ- ಶಾಂತಿ

    • ಬಡತನ, ಅಪರಾಧ, ದುರ್ವ್ಯಸನ-ದುಶ್ಚಟಗಳು, ವಿವಾಹ ವಿಚ್ಛೇದಗಳ -  ಪ್ರಮಾಣ

    • ಮಹಿಳೆ, ಹಿಂದುಳಿದವರು, ಅಲ್ಪಸಂಖ್ಯಾತರು, ಅಬಲರ -  ಸ್ಥಾನಮಾನ

    • ಜಾತಿ, ಮತ, ಧರ್ಮ, ರಾಜಕೀಯ - ಕಲಹಗಳು
ಮಾನಸಿಕ  ಸ್ವಾಸ್ಥ್ಯ


    • ಪ್ರೀತಿ ಮತ್ತು ಕ್ರಿಯಾಶೀಲತೆ – ಸಾಮರ್ಥ್ಯ

    • ದುಗುಡ-ದುಮ್ಮಾನ, ಆತಂಕ-ಅಳಕು, ಅಂಜಿಕೆ, ಖಿನ್ನತೆ

    • ನೀತಿ-ನಿಯಮ  ಬಾಹಿರ  ನಡವಳಿಕೆಗಳು
ಸಾಹಿತ್ಯ ಮತ್ತು ಮಾನಸಿಕ ಸ್ವಾಸ್ಥ್ಯ- ೧

    ಸುಪ್ತ  ಬಯಕೆಗಳ  ಭ್ರಾಮಕ  ಈಡೇರಿಕೆ 
    • ಅವ್ಯಕ್ತ  ಅನುಭವ -  ಪದಗಳಲ್ಲಿ  ಪ್ರಕಟ

    • ಅಗತ್ಯ/ಬಯಕೆ  ಗಳ  ಕ್ಷಣಿಕ, ಭ್ರಾಮಕ  ಪೂರೈಕೆ

    • ಕನಸು – ಹಗಲುಗನಸುಗಳ  ಸಾಮ್ಯ
      • ಸಾಹಿತ್ಯದ ‘ನಾಯಕ’ ನಲ್ಲಿ  ಓದುಗನ  ತಾದಾತ್ಮ್ಯತೆ
    ಸಾಹಿತ್ಯ ಮತ್ತು ಮಾನಸಿಕ ಸ್ವಾಸ್ಥ್ಯ - ೨

      ಅನುಭವ ಶೋಧ – ಆಗುವಿಕೆ. 
      • ಅನುಭವ  ವೈಶಾಲ್ಯ – ಸಾಧ್ಯತೆಗಳ  ಸಾಕ್ಷಾತ್ಕಾರ

      • ಆದರ/ಪ್ರೀತಿಯ ಬಯಕೆ – ತಾನಾಗುವ  ಅಗತ್ಯ

      • ಆದರಕ್ಕಾಗಿ  ತಾನಾಗುವುದರ  ಕಡೆಗಣಿಕೆ

      • ಸಾಹಿತ್ಯ, ಅನುಭವ ಶೋಧದಿಂದ ತನ್ನನ್ನು ಕಂಡುಕೊಳ್ಳುವ ಕ್ರಿಯೆ
    ಸಾಹಿತ್ಯ ಮತ್ತು ಮಾನಸಿಕ ಸ್ವಾಸ್ಥ್ಯ - ೩

      • ಪ್ರಜ್ಞೆ – ಎತ್ತರ, ವಿಸ್ತಾರ.

      • ಪ್ರಜ್ಞಾವಸ್ಥೆಗಳು – ವಸ್ತು ಗ್ರಹಣೆ

      • ಜ್ಞಾನ - ಪ್ರಜ್ಞಾವಸ್ಥೆಯ ನಿರ್ಮಾಣ

      • ತುರಿಯಾವಸ್ಥೆ - ‘ಶಾಂತ ಎಚ್ಚರ’ ದ ಹೊಳಹು - ಸಾಹಿತ್ಯ
    ಸಾಹಿತ್ಯ  ಮತ್ತು  ಸಮಾಜ

      • ಅನುಭವ  ವಿಸ್ತಾರ, ಸಾಧ್ಯತೆಗಳು

      • ವೈಚಾರಿಕ  ಕ್ರಾಂತಿ

      • ಪ್ರೋತ್ಸಾಹ/ಪುರಸ್ಕಾರ,  ತಿರಸ್ಕಾರ

      • ಸಾಹಿತ್ಯ  ಸಮಾಜದ  ಕೂಸು
    ಸಾಹಿತ್ಯ  ಮತ್ತು  ಸಾಮಜಿಕ ಸ್ವಾಸ್ಥ್ಯ

      • ಸಾಹಿತಿಯ  ಎಚ್ಚರ  ಮತ್ತು  ಸೂಕ್ಷ್ಮಗ್ರಾಹಿತ್ವ

      • ಅನಿಷ್ಟಗಳ  ಮೇ ಲೆ  ಬೆಳಕು

      • ಭ್ರಷ್ಟತೆ  ಅನಾಚಾರಗಳ  ಬಯಲು

      • ಆತಂಕ, ಸ್ತಿತ್ಯಂತರಗಳ  ಸೂಚನೆ – ವಿವೇಚನೆ
    ವ್ಯಕ್ತಿ – ಸಮಾಜ - ಸಾಹಿತ್ಯ


      • ಕಟ್ಟುಪಾಡುಗಳು, ಆಚಾರ-ವಿಚಾರ, ಪದ್ದತಿ-ಪರಂಪರೆ

      • ಸಾಮಾಜಿಕ ಪಿಡುಗುಃ  ವರದಕ್ಷಿಣೆ, ಬಾಲ್ಯ/ವಿಧವಾ ವಿವಾಹ,  ಮಹಿಳಾ ಶೋಷಣೆ

      • ಪ್ರಭಾವ – ಪರಿಣಾಮಗಳು.
    ಸಮಾಜ ಸ್ವಾಸ್ಥ್ಯ – ಸಾಹಿತ್ಯದ ಕೊಡುಗೆ

      • ಅಂತರಂಗದ ಶೋಧ – ಅಭಿವ್ಯಕ್ತಿ

      • ಅರಿವು, ತಿಳುವಳಿಕೆ ವಿಸ್ತಾರ

      • ಸಮಸ್ಯೆಯ ಬಹುಮುಖ ಆಯಾಮ, ಸಮಗ್ರ ಪರಿಕಲ್ಪನೆ

      • ಕಾರ್ಯೂನ್ಮುಖತೆ  - ಪ್ರೇರಣೆ  

    Friday, June 4, 2010

    Message on the occasion of first death anniversary of S. Krishnamurthy

                                                      
    Revered S. Krishnamurthy was a spiritually awakened person who spent his lifetime in helping people without any distinction of caste, creed and gender in getting access to their spiritual nature. He conducted classes and workshops on the principles and practices of Meditation, wrote on his own experiences with it, arranged public lectures, held periodical retreats and celebrated the achievements in the field – all with such regularity, discipline and with free of cost to participants, every week, decades after decades, that people not only felt safe and secured while participating in his pursuit but benefited immensely too.
    His writings, sharing his thoughts and experiences, were full of scintillating clarity, deep and vast experiences illustrating the possibilities of the inner domain, reflecting the profound wisdom of the sages and, inspiration to the readers to embark on the journey. All his books are a refreshing treat to the spiritual aspirant.
    A very tall man, dressed in majestic white apparel, conducted himself with such grace, erudition and humility that it was uplifting to anyone who came in contact with him, to behold him, to be with him and experience the soothing balm to oneself.
    It is indeed my privilege to have spent some time with him and the group he used to gather sharing thoughts and experiences and they are some of the profound moments of my life.  His openness to people and genuine interest in their development is global in reach and proportion. May he be a beacon of light to all those who know him and read his works.



    Foreword to a book on UGK

    ಯುಜಿಹೊಗೆಯಿಲ್ಲದ ಜ್ವಾಲೆ
    ಎಸ್. . ಶಾಮರಾವ್


                            ಮುನ್ನುಡಿ

    ನಾಯಮಾತ್ಮಾ ಪ್ರವಚನೇನೆ ಲಭ್ಯೋ ನ ಮೇಧಯಾ ನ ಬಹುನಾ ಶೃತೇನ
    ಯ ಮೇ ವೈಶ ವೃಣುತೇ ತೇನ ಲಭ್ಯಸ್ತಸ್ರೈಷ ಆತ್ಮಾ ವಿವೃಣುತೇ ತನೂಂ ಸ್ವಾಮ್                                   (ಕಠೋಪನಿಷತ್ ೧..೨೩.)
    ಆತ್ಮಪ್ರವಚನದಿಂದ ಲಭ್ಯನಲ್ಲ. ಮೇಧಾ ಶಕ್ತಿಯಿಂದಲೂ  ಶ್ರವಣ ದಿಂದಲೂ ಲಭ್ಯನಲ್ಲ. ‘ಆತ್ಮನ ಅನುಗ್ರಹ/ಆಯ್ಕೆ ಯಿಂದ ಮಾತ್ರ ಲಭ್ಯನು. ಅವನಿಗೆ ಆತ್ಮನು ತನ್ನ ತನುವನ್ನೇ ತೋರುತ್ತಾನೆ.
                              ---
    ಸಹಜ ಸ್ಥಿತಿಯ ಸಾಕ್ಷಾತ್ಕಾರ ಯುಜಿ. ಇವರ ಬದುಕು ವಿಚಾರವನ್ನು ಮನ ತಟ್ಟುವಂತೆ ನಮಗೆ ಮುಟ್ಟಿಸಿದ್ದಾರೆ ಶ್ರೀ ಶಾಮರಾಯರು ಈ ಪುಸ್ತಕದಲ್ಲಿ.

    2
    ಶಾಮರಾಯರು ಯುಜಿ ಅವರನ್ನು ನಿಕಟವಾದ ಸಂಪರ್ಕದಿಂದ ಬಲ್ಲವರು, ಯುಜಿಯವರ ದೇಹ ಬುದ್ಧಿ ಮನಸ್ಸುಗಳನ್ನು ಹಲವು ಸ್ತರದಲ್ಲಿ ಕಂಡಿದ್ದಾರೆ. ಕಂಡಿದ್ದನ್ನು ನಮ್ಮ ಪರಂಪರೆಯ ಜ್ಞಾನ, ಪರಿಶ್ರಮದ ಹಿನ್ನಲೆಯಲ್ಲಿ ನಮಗೆ ಪರಿಚಯಿಸಿದ್ದಾರೆ. ಈ ದಿಸೆಯಲ್ಲಿ ಈ ಕೃತಿ ವಿನೂತನ ವಿಶಿಷ್ಟ ನೋಟವನ್ನು ವಿಶ್ವಾಸಾರ್ಹವಾಗಿ ಒದಗಿಸಿಕೊಡುವಲ್ಲಿ ಯಶಸ್ವಿಯಾಗಿದೆ. ಇದಕ್ಕಾಗಿ ಶಾಮರಾಯರು ಅಭಿನಂದನೀಯರು.

    ಯುಜಿ ನಮ್ಮೆಲ್ಲಾ ನಂಬಿಕೆ, ಪರಂಪರೆಗಳನ್ನು ತಿರಸ್ಕರಿಸುತ್ತಾರೆ. ಯಾಕೆಂದರೆ ಈಸಾಕ್ಷಾತ್ಕಾರಎಂಬುದು ಮನಸ್ಸು ವಿಚಾರ ಅನುಭವಗಳಿಂದ ಹೊರತಾದುದು. ಸಾಧನೆ ಪರಿಶ್ರಮಗಳಿಂದ ದೊರಕುವಂತಹದಲ್ಲ. ಇದೊಂದು ಸಹಜ ಜೈವಿಕ ಸ್ಥಿತಿ. ಇದು ಅದರಷ್ಟಕ್ಕೆ ಅದಾಗೇ ಆಗುತ್ತದೆ ಅದರ ಕಾಲದಲ್ಲಿ ನಾವು ತಡೆ ಒಡ್ದದಿದ್ದರೆ. ಜ್ಞಾನ, ಅನುಭವ, ಸಾಧನೆ, ಶೋಧನೆ ಎಲ್ಲವೂ ತಡೆಗಳೇ, ಅವು ನಮ್ಮನ್ನು ಸಹಜ ಸ್ಥಿತಿಯ ವಿರುದ್ಧ ಕೊಂಡೊಯ್ಯುತ್ತದೆ. ನಮಗೂ,  ವಸ್ತು-ಸಂಬಂಧ-ಪ್ರಪಂಚಕ್ಕೂ  ಅಡ್ಡಗೋಡೆಯಾಗಿ ನಿಲ್ಲುತ್ತದೆ. ಯುಜಿಯ ಬದುಕು ಈ ಎಲ್ಲ
    -     3 -
    ಅಡ್ಡ ಗೊಡೆಗಳ ಕಳಚಿ ಪ್ರಪಂಚದೊಡನೆ ನೇರ ಸಂಪರ್ಕ ಸ್ಪಂದನದಿಂದ ಇರಬಹುದೆಂಬುದನ್ನ ತೋರಿಸಿದ್ದಾರೆ. ಪ್ರತಿಬಿಂಬ ಪ್ರಜ್ಞೆ ( ರಿಫ್ಲೆಕ್ಷಿವ್
    ಅವೇರ್ನೆಸ್ಸ್ )  ಆ ಕ್ಷಣದ ಅರಿವಿಗೆ, ಮನಸ್ಸು ವಿಚಾರ ನೆನಪುಗಳನ್ನು ಅಳವಡಿಸದೆ, ಪ್ರತಿಕ್ರಯಿಸುವುದು. ಇದು ಅವರಇರುವಿಕೆಆಗಿತ್ತು. ಅದೊಂದು ಅತ್ಯುತ್ತಮ ಹಾಗೂ ವಿಶಿಷ್ಟ ಬುದ್ಧಿಮತ್ತೆಯ ಸಿಡಿಯಾಗಿರುತ್ತಿತ್ತು.

     ಸಾಮಾನ್ಯವಾಗಿ ಜನರು, ಅದರಲ್ಲೂ ಹೆಚ್ಚಾಗಿ ಯುಜಿಯನ್ನ ನೋಡದೆ, ಬೆರೆಯದೆ ಇರುವವರು, ಇವರದು ನಮ್ಮ ವೇದೋಪನಿಷತ್ತು, ದರ್ಶನ, ಶಾಸ್ತ್ರ ಪುರಾಣಗಳಿಗೆ ಹೊರತಾದದ್ದು, ಅನಾದಿಕಾಲದಿಂದಲೂ ಋಷಿ ಮುನಿಗಳು ಕಂಡು ಮೈದಾಳಿದ ಸತ್ಯವನ್ನು ಅಲ್ಲಗಳೆಯುತ್ತಿದ್ದಾರೆ ಎನ್ನಬಹುದು. ಆದರೆ ಅದು ಸತ್ಯಕ್ಕೆ ದೂರ ಎಂಬುದನ್ನ ಶಾಮರಾಯರು ಈ ಪುಸ್ತಕದಲ್ಲಿ ತೋರಿಸಿಕೊಟ್ಟಿದ್ದಾರೆ. ನಮ್ಮಲ್ಲಿಯ ಆಚಾರ್ಯ, ಅವದೂತ ( ಮತ್ತು ಕೆಲವರಲ್ಲಿ ಅವೆರಡೂ ಒಂದೇ ಆಗಿರುವ) ಪರಂಪರೆಯನ್ನು ಹೇಳುತ್ತಾ ಹೇಗೆ ಯುಜಿ ಅವರು ಅವಧೂತ ಪರಂಪರೆಗೆ ಸೇರುತ್ತಾರೆ, ಅವಧೂತ ಲಕ್ಷಣಗಳಿಗೆ ಅದೆಷ್ಟು ಹೋಲುತ್ತಾರೆ ಎಂದು ಸುಧೀರ್ಘ ಸುವಿವರ ನಿರೂಪಣೆಯಿಂದ ವಿಶದ ಪಡಿಸುತ್ತಾರೆ. ಈ ದಿಸೆಯಲ್ಲಿ ಶಿವಶರಣ ಶರಣೆಯರು, ಹರಿದಾಸರು, ಬೈರಾಗಿಗಳು, ದತ್ತಾತ್ರೇಯ, ರಾಮಕೃಷ್ಣ
    -     4 -
    ಪರಮಹಂಸ, ರಮಣ ಮಹರ್ಷಿ, ಶ್ರೀ ಚಂದ್ರಶೇಖರ ಭಾರತಿ ಸ್ವಾಮಿ, . ರಾ. ಬೇಂದ್ರೆಈ ಎಲ್ಲರನ್ನೂ ನಮ್ಮ ಮುಂದೆ ನಿಲ್ಲಿಸುತ್ತಾರೆ ಶಾಮರಾಯರು. ಯುಜಿ ಸ್ಥಿತಿ ಯನ್ನು ವಿವರಿಸಲು ಬೇಂದ್ರೆ ಪದ್ಯದ ನೆರವು ಪಡೆಯುತ್ತಾರೆ. ಹಾಗೆಯೇ ಚಿದಾನಂದಾವಧೂತ, ಸಾವಳಗಿ ಮಹಮದ್ ಸಾಹೇಬ ಇತ್ಯಾದಿ. ಇವರೆಲ್ಲರೂ ಉಪನಿಷತ್ತಿನ ಸತ್ಯದ ಸಾರ ಮೈತಾಳಿದವರೇ. ಹೀಗಾಗಿ, ಶಾಮರಾಯರು ಯುಜಿ ಇಂದ ನಮ್ಮ ಪರಂಪರೆಗೊಂದು ಹೊಸ ಮೆರಗು, ನಮ್ಮ ಪರಂಪರೆಯಿಂದ ಯುಜಿಗೊಂದು ಹೊಸ ಹೊಳಹು ತರುತ್ತಾರೆ.
     ರಾಯರಿಗೆ ಯುಜಿಯಲ್ಲಿ ಇರುವ ಶ್ರದ್ಧೆ, ತನ್ಮಯತೆ, ಸಮೀಪ ಒಡನಾಟ ಎಲ್ಲವೂ ಅವರ ಮಾತಿಗೆ ಅಧಿಕೃತತೆಯನ್ನ ಪ್ರತಿ ಪುಟದಲ್ಲೂ ಕೊಡುತ್ತದೆ. ಯುಜಿ ರೂಪಾಂತರಗೊಂಡ ದೇಹದ ವಿವರ ಮತ್ತು ವರ್ಣಣೆ, ಹಲವಾರು ಶ್ರೇಷ್ಟ ಜ್ಯೋತಿಷಿಗಳ ಸಮಾಗಮ, ಯುಜಿ ಕಡೆಯ ಕ್ಷಣಗಳ ವಿವರಗಳೆಲ್ಲವನ್ನೂ ಹೃದಯಂಗಮವಾಗಿ ಚಿತ್ರಿಸಿದ ರೀತಿ ಅದ್ಭುತವಾಗಿದೆ. ಇದೊಂದು ಕನ್ನಡಕ್ಕೆ ಅಪರೂಪದ ಕೊಡುಗೆಯೇ.
    ಶಾಮರಾಯರ ಬರವಣಿಗೆಯಲ್ಲಿ ನಿಖರತೆ, ಸ್ಪಷ್ಟತೆ ಹಾಗೂ ಸಹೃದಯತೆಯ ಭಾವಸಾಗರದಲ್ಲಿ ಮಿಂದ ನಿರ್ಮಲತೆ ಇದೆ. ಓದು ಸುಗಮವಾಗಿ ಸಾಗುತ್ತದೆ. ಕನ್ನಡದ ಬಹು ಜನ ಈ ಪುಸ್ತಕ ಓದಿ, ತಮ್ಮ
    -     5 -
    ಭ್ರಮೆಗಳನ್ನು ಕಳಚಿಕೊಂಡು, ‘ಆತ್ಮವಂತರಾಗಲು ಒಂದಿಷ್ಟು ಅರ್ಹತೆ ಪಡೆದು ಸ್ವ-ಪರ ಹಿತಕ್ಕೆ ನಾಂದಿಯಾಗಲೆಂದು ಹಾರೈಸುತ್ತೇನೆ.  
    ಬೆಂಗಳೂರು